Slide
Slide
Slide
previous arrow
next arrow

ಮಹೇಶ ನವಮಿ ಆಚರಣೆ

300x250 AD

ದಾಂಡೇಲಿ: ನಗರದ ಮಹೇಶ್ವರಿ ಪ್ರಗತಿ ಮಂಡಳದ ಆಶ್ರಯದಡಿ ಮಹೇಶ ನವಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಹೇಶ ನವಮಿಯ ನಿಮಿತ್ತ ವಿಶೇಷ ಪೂಜಾರಾಧನೆಗಳನ್ನು ನಡೆಸಿದ ಬಳಿಕ ನಗರದ ಸಾರ್ವಜನಿಕ ಆಸ್ಪತ್ರೆ, ಇ.ಎಸ್.ಐ ಆಸ್ಪತ್ರೆ ಮತ್ತು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಇನ್ನಿತರ ಆಹಾರ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹೇಶ್ವರಿ ಪ್ರಗತಿ ಮಂಡಳದ ಪ್ರಮುಖರುಗಳಾದ ರಘುನಾಥ್ ರಾಂದಾಡ್, ಎನ್.ಕೆ.ಮಹೇಶ್ವರಿ, ಪ್ರದೀಪ್ ಬಂಗ್, ಸೋನಿ, ಅನುರಾಗ್ ಸಾವ್ ಹಾಗೂ ಮಹೇಶ್ವರಿ ಪ್ರಗತಿ ಮಂಡಳದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top